ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಬಲಿಪ ಭಾಗವತರಿಗೆ ದೇರಾಜೆ ಸ್ಮತಿ ಗೌರವ ಪ್ರದಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಫೆಬ್ರವರಿ 27 , 2015
ಫೆಬ್ರವರಿ 27, 2015

ಬಲಿಪ ಭಾಗವತರಿಗೆ ದೇರಾಜೆ ಸ್ಮತಿ ಗೌರವ ಪ್ರದಾನ

ಸುಳ್ಯ : ಯಕ್ಷಗಾನ ಬಯಲಾಟಕ್ಕಿಂತಲೂ ಪ್ರೇಕ್ಷಕ ವರ್ಗವನ್ನು ಹಿಡಿದಿಟ್ಟುಕೊಳ್ಳುವ ಏಕೈಕ ಕಲೆ ಯಕ್ಷಗಾನ ತಾಳಮದ್ದಳೆ. ಇದಕ್ಕೆ ವಿಶೇಷ ಚಾಪು ಮೂಡಿಸಿದವರು ದೇರಾಜೆ ಸೀತರಾಮಯ್ಯ ಅವರು. ಅವರ ಮೂಲಕ ಈ ಭಾಗದಲ್ಲಿ ಯಕ್ಷಗಾನ ಪ್ರಸಿದ್ದಿ ಪಡೆಯುವಂತಾಗಿದೆ ಎಂದು ಹಿರಿಯ ಸಾಹಿತಿ ಏರ್ಯ ಲಕ್ಷತ್ಮಿನಾರಾಯಣ ಆಳ್ವ ಹೇಳಿದರು.

ಅವರು ಯಕ್ಷಗಾನದ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರಿಗೆ ಚೊಕ್ಕಾಡಿ ಶ್ರೀರಾಮ ದೇವಾಲಯದ ದೇಸಿ ಭವನದಲ್ಲಿ ನಡೆದ ಸಮಾರಂಭದಲ್ಲಿ ದೇರಾಜೆ ಸ್ಮತಿ ಗೌರವ ಪ್ರದಾನ ಮಾಡಿ ಮಾತನಾಡಿದರು.

ಹಿರಿಯ ಯಕ್ಷಗಾನ ಅರ್ಥಧಾರಿ ದೇರಾಜೆ ಸೀತಾರಾಮಯ್ಯ ಅವರ ಜನ್ಮ ಶತಮಾ ನೋತ್ಸವದ ಅಂಗವಾಗಿ ಚೊಕ್ಕಾಡಿ ದೇರಾಜೆ ಸಾಂಸ್ಕೃತಿಕ ರಂಗ, ದೇರಾಜೆ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಕಾರ್ಯಕ್ರಮ ಆಯೋಜಿಸಿತ್ತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇರಾಜೆ ಅವರ ಸ್ಮರಣೆ ಇಂದು ಪ್ರಸ್ತುತ. ಅವರು ಮುಖ್ಯವಾಗಿ ಯಕ್ಷಗಾನದ ತಾಳಮದ್ದಳೆ ಪ್ರಾಕಾರಕ್ಕೆ ನೀಡಿದ ಕೊಡುಗೆ ಅನನ್ಯ ಎಂದರು.

ಕಜೆ ಈಶ್ವರ ಭಟ್ ದೇರಾಜೆ ಸಂಸ್ಮರಣೆ ಮಾಡಿದರು. ಹಿರಿಯ ಯಕ್ಷಗಾನ ಕಲಾವಿದ ಡಾ.ಚಂದ್ರಶೇಖರ ದಾಮ್ಲೆ ಅಭಿನಂದನಾ ಮಾತನಾಡಿದರು. ಕೊಡಂಕಿರಿ ಪ್ರಕಾಶನ ದವರು ಹೊರತಂದ ದೇರಾಜೆ ಅವರ ಕತಿ ಭೀಷ್ಮಾರ್ಜುನ, ಸುಗ್ರೀವ ಸಖ್ಯ, ಮಹಾಭಾರತ ಅಕ್ಷಯ ಪಾತ್ರೆ ಕತಿಗಳನ್ನು ಅನಾವರಣ ಮಾಡಲಾಯಿತು.

ಅತಿಥಿಗಳಾಗಿ ಐವರ್ನಾಡು ಶ್ರೀಪಂಚಲಿಂ ಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಗಣಪಯ್ಯ ಭಟ್ ಪಾಲೆಪ್ಪಾಡಿ, ಪ್ರೊ.ಶಂಕರ್, ಜಿ.ಕೆ.ಭಟ್ ಸೇರಾಜೆ, ಶ್ರೀಕರ ಭಟ್ ಮರಾಠೆ, ಎಸ್.ಎನ್.ಪಂಜಾಜೆ, ಮೂರ್ತಿ ದೇರಾಜೆ ಭಾಗವಹಿಸಿದ್ದರು. ದೇರಾಜೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ಅನೆಕಾರ ಗಣಪಯ್ಯ ಅವರು ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಭಟ್ ಚೂಂತಾರು ವಂದಿಸಿದರು. ಸತ್ಯನ್ ದೇರಾಜೆ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಸೌಗಂಕ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳ ದಲ್ಲಿ ಬಲಿಪ ನಾರಾಯಣ ಭಾಗವತರು, ಲಕ್ಷೀತ್ಮಶ ಅಮ್ಮಣ್ಣಾಯ, ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಮುಮ್ಮೇಳದಲ್ಲಿ ಶಂಭು ಶರ್ಮ, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಾ ಭಟ್, ಸತ್ಯನ್ ದೇರಾಜೆ, ರಾಮ ಜೋಯಿಷ ಭಾಗವಹಿಸಿದರು. ಹೊ.ನ.ರಾಘ ವೇಂದ್ರ ಗರ್ತಿಕೆರೆ ಅವರಿಂದ ರಂಗಗೀತೆಗಳ ಗಾಯನ ನಡೆಯಿತು.



ಕೃಪೆ : http://vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ